Skip to playerSkip to main content
  • 18 minutes ago
ಹಾಸನ ಜಿಲ್ಲೆಯ ಸಕ್ಲೇಶ್ಪುರ ತಾಲ್ಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿರುವ ಶ್ರೀದೇವಿ ಲಾಡ್ಜ್‌ನಲ್ಲಿ ಬೆಂಗಳೂರಿನ ಯುವತಿ ವರ್ಷಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ರಾಘು ಮತ್ತು ದರ್ಶನ್ ಎಂಬ ಇಬ್ಬರು ಸ್ನೇಹಿತರೊಂದಿಗೆ ಸಕ್ಲೇಶ್ಪುರಕ್ಕೆ ಟ್ರಿಪ್ ಬಂದಿದ್ದ ಯುವತಿಯ ಮೃತದೇಹ ಲಾಡ್ಜ್‌ನ ಬಾತ್ರೂಮ್‌ನಲ್ಲಿ ಪತ್ತೆಯಾಗಿದೆ. ಘಟನೆ ನಡೆದ ನಂತರ ಜೊತೆಯಲ್ಲಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಸಕ್ಲೇಶ್ಪುರ ಡಿವೈಎಸ್‌ಪಿ ಮಾಲ್ತೇಶ್ ನೇತೃತ್ವದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಲಾಡ್ಜ್ ಮಾಲೀಕ ಮತ್ತು ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಂತರ ಸಾವಿನ ನಿಜವಾದ ಕಾರಣ ತಿಳಿಯಲಿದೆ. ಮೃತಳ ಕುಟುಂಬಸ್ಥರು ಬೆಂಗಳೂರಿನಿಂದ ಘಟನಾ ಸ್ಥಳಕ್ಕೆ ತೆರಳುತ್ತಿದ್ದಾರೆ.

Category

🗞
News
Comments

Recommended