ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಅಕ್ರಮ ಸಂಬಂಧದ ಅನುಮಾನದ ಮೇರೆಗೆ ಶಂಕರ್ ಎಂಬ 23 ವರ್ಷದ ಯುವಕ ಹನುಮೇಶ್ ಎಂಬ ವ್ಯಕ್ತಿಯನ್ನು ಊಟ ಮಾಡುತ್ತಿದ್ದ ಸಮಯದಲ್ಲಿ ಕೊಚ್ಚಿ ಹತ್ಯೆ ಮಾಡಿದ ಘಟನೆ ನಡೆದಿದೆ. ಶಂಕರ್ನ ಸೋದರಿ ಜ್ಯೋತಿಗೆ ಹನುಮೇಶ್ನೊಂದಿಗೆ ಅಕ್ರಮ ಸಂಬಂಧ ಇದೆ ಎಂಬ ಅನುಮಾನ ಶಂಕರ್ಗೆ ಇತ್ತು. ಕೃತ್ಯ ಎಸಗುವ ಮೊದಲು ಆರೋಪಿ ಇನ್ಸ್ಟಾಗ್ರಾಮ್ನಲ್ಲಿ ಮಚ್ಚು ಹಿಡಿದ ಫೋಟೋ ಪೋಸ್ಟ್ ಮಾಡಿದ್ದ. ಹತ್ಯೆಯ ನಂತರ ಆರೋಪಿ ಶಂಕರ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮೃತನ ಕುಟುಂಬ ತೀವ್ರ ದುಃಖದಲ್ಲಿದ್ದು, ನ್ಯಾಯಕ್ಕಾಗಿ ಮೊರೆಯಿಡುತ್ತಿದ್ದಾರೆ.
Comments