Skip to playerSkip to main content
  • 6 minutes ago
ಮೈಸೂರು: "ಕಾವೇರಿ ಕೊಳ್ಳದ ರೈತರು ಯಾರೂ ಕೂಡ ಬಿತ್ತನೆ ಮಾಡಬಾರದೆಂಬ ಸಿಎಂ ಡಿ.ಕೆ.ಶಿವಕುಮಾರ್​ ಅವರ ಹೇಳಿಕೆಯನ್ನು ಗಮನಿಸುತ್ತಿದ್ದರೆ, ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವಂತಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಕಾವೇರಿ ನಿರ್ವಹಣಾ ಸಮಿತಿ ನೀಡಿರುವ ತೀರ್ಪು ರೈತರ ಪಾಲಿಗೆ ವಿಷವಾಗಿದೆ. ಈ ಭಾಗದ ರೈತರು, ದನ ಕರುಗಳಿಗೆ ಕುಡಿಯಲು ಕೂಡಾ ನೀರು ಸಿಗುತ್ತಿಲ್ಲ. ಅಂತಹ ಪರಿಸ್ಥಿತಿ ಬಂದಿದೆ. ಕಾವೇರಿ ವಾಟರ್​ ಮ್ಯಾನೇಜ್​ಮೆಂಟ್ ಟ್ರಿಬ್ಯುನಲ್​ ಆದೇಶ ಮಾಡುವ ಮುನ್ನವೇ ಕಾವೇರಿ ನೀರು ಬಿಟ್ಟಿದ್ದಾರೆ. ​ಟ್ರಿಬ್ಯುನಲ್ ಮುಂದೆ ಸರಿಯಾದ ರೀತಿಯಲ್ಲಿ ವಾದ ಮಾಡದೇ ಇರುವುದಕ್ಕೆ ಇಂತಹ ತೀರ್ಪು ಬಂದಿದೆ. ರೈತರ ರಕ್ಷಣೆಗೆ ಮುಖ್ಯಮಂತ್ರಿಗಳೇ ಮುತುವರ್ಜಿವಹಿಸಬೇಕು" ಎಂದು ಒತ್ತಾಯಿಸಿದರು.ಶಿಲ್ಪಾ ಸಾಧನೆಗೆ ಮೆಚ್ಚುಗೆ: "ಕಾಮನ್ ವೆಲ್ತ್ ಪ್ಯಾರಾ ಕ್ರೀಡಾಕೂಟದಲ್ಲಿ ಶಿಲ್ಪಾ ಸಾಧನೆ ಮೆಚ್ಚುವಂಥದ್ದು. ಕೆ.ಆರ್.ನಗರದ ಬಡ ಕುಟುಂಬದಿಂದ ಬಂದಿರುವ ಅವರ ಸಾಧನೆಯ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ" ಎಂದರು.ಆಗಸ್ಟ್ 1ರಂದು ಪ್ರಧಾನಿ ಮೋದಿ ಮೈಸೂರಿಗೆ: ಆಗಸ್ಟ್ 1ರಂದು ಮಧ್ಯಾಹ್ನ 3:30ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಲಿದ್ದು, ನಾರಾಯಣ್ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕಾನಂದ ಸ್ಮಾರಕ ಉದ್ಘಾಟಿಸಲಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ: ಸಚಿವ ರಾಮಲಿಂಗಾರೆಡ್ಡಿ

Category

🗞
News
Transcript
00:01કાવેરી વાટર માંજમેંટ અથારીટી સી ડાબળુ એમે
00:12આ ટરીબુનાલ તિરુમાના માડો મુંચિતુ વાગીને
00:17કાંગ્રસ સરકારા એતે છુવાગી કાગ્લે નીરણના હરીબીડુ વંતે કલ્સા એગાગ્લે માડાગીદે
00:24મુક્ય મંત્રગળા હેળકે નુકુડ તો નેંપમડુકો વએકુ કાવેરી કોળળદા રઈતરુ યારુ કુડ બીતને માડ
00:52યાતુ નેમાય ઇભાગદા રઈતરીગે દના કર્ગળુકુ કુડ કુડા કુડીએકે નીરુ સિક્તાલ અંતા
00:59પરસ્તીતીએદે ટિબ્ણળ આદેશમાડુ મુંચીતુવગે નીરના બિટિતિદારે
01:04કાવેર્ય વાટર્માનિં ટિબ્ણળ મંદે સર્યાદરીતીતીનાલે વાદા મંડાંડને માડદેર તકંતા પરિણા�
01:27તડા માડુધના
Comments

Recommended