ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸ್ಥಳದಲ್ಲಿ ಪೋಲಿಸರು ಆಹಾರ ಪೂರೈಕೆಗೆ ತಡೆ ಹಿಡಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಿಜೆಪಿ ವಕ್ತಾರ ಆಶಿತೋಷ್ ರಂಕಾ ಅವರು ಈ ಕುರಿತು ಮಾತನಾಡಿದ್ದು, ಪೋಲಿಸರು ಚೆಕ್ಪೋಸ್ಟ್ ಸ್ಥಾಪಿಸಿ ಆಹಾರ ಪೂರೈಕೆಗೆ ಅಡ್ಡಿ ಮಾಡುತ್ತಿದ್ದಾರೆ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಕುಳಿತಿರುವವರಿಗೆ ಆಹಾರ ತಯಾರಿಸಿ ಕೊಡುವ ಕಾರ್ಯ ನಡೆಯುತ್ತಿದ್ದು, ಪಕ್ಕದ ರಕಬ್ ಗಂಜ್ ಪ್ರದೇಶದಲ್ಲೂ ಆಹಾರ ವಿತರಣೆ ಮಾಡಲಾಗುತ್ತಿದೆ. ಆದರೆ ಯಾರು ಆಹಾರ ತರುತ್ತಿದ್ದಾರೆ, ಯಾರು ಬುಕ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗದ ಕಾರಣ ಅನುಮಾನಗಳು ಹೆಚ್ಚಾಗಿ ತಪಾಸಣೆ ಜಾಸ್ತಿಯಾಗಿದೆ ಎಂದು ತಿಳಿದು ಬಂದಿದೆ.
Comments