ದೇಹಳಿಯ ಜಂತರ್ ಮಂತರ್ನಲ್ಲಿ ಕೋಕ್ರೋಜ್ ಪಾರ್ಟಿಯಿಂದ ಎರಡನೇ ದಿನವೂ ಪ್ರತಿಭಟನೆ ಮುಂದುವರೆದಿದೆ. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಕ್ಷ ಘೋಷಿಸಿದೆ. ನೀಟ್ ಅಕ್ರಮದಿಂದ ನೊಂದ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂಬ ಬೇಡಿಕೆಯನ್ನು ಮುಂದಿಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷಗಳು ನೀಟ್ ಅಕ್ರಮ ಚರ್ಚೆಗೆ ಒತ್ತಾಯಿಸುತ್ತಿದ್ದು, ಇಂಡಿಯಾ ಕೂಟ ಮೋದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದೆ. ಸಂಸತ್ತಿನ ಒಳಗೂ ಗದ್ದಲ ಮುಂದುವರೆದಿದ್ದು, ಕಲಾಪ ನಡೆಯದ ಸ್ಥಿತಿ ಎದುರಾಗಿದೆ.
Comments