ಬಂಟ್ವಾಳದ ಬಿ.ಸಿ. ರೋಡಿನ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಎಂಬುವರನ್ನು ಆರೋಪಿ ಚೇತನ್ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ಕು ವರ್ಷದ ಹಿಂದೆ ಬ್ರೇಕಪ್ ಆಗಿದ್ದ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ಹತ್ಯೆಗೆ ಮುನ್ನ ಲಾವಣ್ಯ ತನ್ನ ಬಾವ ಗೌತಮ್ಗೆ ಕೊನೆಯ ಕರೆ ಮಾಡಿದ್ದಳು. ಗೌತಮ್ ಜೊತೆ ಮಾತನಾಡುತ್ತಿದ್ದಾಗಲೇ ಚೇತನ್ ಹತ್ಯೆ ಮಾಡಿದ್ದಾನೆ. ಹತ್ಯೆ ನಂತರ ಆರೋಪಿ ಲಾವಣ್ಯಳ ತಂದೆಗೆ ಫೋನ್ ಮಾಡಿ 'ನಿಮ್ಮ ಮಗಳನ್ನು ಕೊಂದಿದ್ದೇನೆ, ನಾನು ಸಾಯುತ್ತೇನೆ' ಎಂದು ಹೇಳಿದ್ದಾನೆ. ಬಳಿಕ ಮಂಗಳೂರಿನಲ್ಲಿ ಆರೋಪಿ ಚೇತನ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಲಾವಣ್ಯಳ ಬಾವ ಗೌತಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments