Skip to playerSkip to main content
  • 9 hours ago
ಬೆಂಗಳೂರಿನ ಸ್ಟರ್ಲಿಂಗ್ ವಸತಿ ಶಾಲೆಯಲ್ಲಿ 12 ವರ್ಷದ ವಿದ್ಯಾರ್ಥಿ ಗುರು ಕಿರಣ್ ನಿಗೂಢ ಸಾವಿಗೀಡಾಗಿದ್ದಾನೆ. ದೈಹಿಕ ಶಿಕ್ಷಕ ನಾರಾಯಣ್ ಹಲ್ಲೆಯಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಳಿಗ್ಗೆ ಜಾಗಿಂಗ್ ಮಾಡುವಾಗ ಕುಸಿದು ಬಿದ್ದ ಎಂದು ಶಾಲೆ ಹೇಳಿದ್ದರೂ, ಪೋಷಕರು ಆಸ್ಪತ್ರೆಗೆ ಬರುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ. ಶಾಲೆಯ ಕ್ಯಾಮೆರಾಗಳು ಕೆಟ್ಟಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಕ್ರೋಧಗೊಂಡ ಸಂಬಂಧಿಕರು ಶಿಕ್ಷಕ ನಾರಾಯಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣದ ತನಿಖೆ ಮತ್ತು ನ್ಯಾಯಕ್ಕಾಗಿ ಪೋಷಕರು ಪೊಲೀಸರ ಬಳಿ ದೂರು ನೀಡಿ ಪ್ರತಿಭಟನೆ ನಡೆಸಿದ್ದಾರೆ.

Category

🗞
News
Comments

Recommended