ಅಯೋಧ್ಯೆ ರಾಮ ದೇವಾಲಯದ ಟ್ರಸ್ಟ್ನ ಹಣ ಲೂಟಿ ಪ್ರಕರಣದಲ್ಲಿ ಪೊಲಿಸರು ಎಂಟು ಆರೋಪಿಗಳ ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 8 ಕೋಟಿ ರೂಪಾಯಿ ಮೌಲ್ಯದ ಹಣ ಮತ್ತು ಚಿನ್ನಾಭರಣ ಲೂಟಿ ಆಗಿದ್ದು, ಆರೋಪಿ ಟಿನ್ನು ಯಾದವ್ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಟ್ರಸ್ಟ್ ಸದಸ್ಯ ಕೃಷ್ಣ ಮೋಹನ್ ದೂರು ಸಲ್ಲಿಸಿದ ನಂತರ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶ ನೀಡಿದ್ದಾರೆ. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದು, ಅವರ ಮನೆಗಳಲ್ಲೂ ತಲಾಷ್ ನಡೆಯುತ್ತಿದೆ. ದೇವಾಲಯದ ಹಣದ ಲೆಕ್ಕಪತ್ರ ಮತ್ತು ಇನ್ನಷ್ಟು ಆರೋಪಿಗಳ ಪತ್ತೆ ತನಿಖೆ ಮುಂದುವರಿದಿದೆ.
Comments