ಕ್ರಿಷಿತಾ ಪಂಡಾ, ಅರ್ವಿಂದ್ ರೆಡ್ಡಿ ಮತ್ತು ವೈಶಾಕ್ ನಡುವಿನ ತ್ರಿಕೋಣ ಪ್ರೇಮ ಕಥೆ ದುರಂತದಲ್ಲಿ ಕೊನೆಗೊಂಡಿತು. ಕ್ರಿಷಿತಾ ಮತ್ತು ಅರ್ವಿಂದ್ ರೆಡ್ಡಿ ಲಿವ್-ಇನ್ ಸಂಬಂಧದಲ್ಲಿದ್ದರು. ವೈಶಾಕ್ ಎಂಟ್ರಿಯಿಂದ ಇಬ್ಬರ ನಡುವೆ ಮನಸ್ತಾಪ ಶುರುವಾಗಿ 2024ರಲ್ಲಿ ಬ್ರೇಕಪ್ ಆಯಿತು. 2025 ನವೆಂಬರ್ನಲ್ಲಿ ಕ್ರಿಷಿತಾ ಅರ್ವಿಂದ್ ವಿರುದ್ಧ ಲೈಂಗಿಕ ಕಿರುಕುಳ ಸೇರಿ ಹಲವು ಆರೋಪಗಳನ್ನು ಮಾಡಿದರು. ವೈಶಾಕ್ ಅನಾಮಧೇಯ ಪತ್ರ ಮೂಲಕ ಅರ್ವಿಂದ್ಗೆ ಬೆದರಿಕೆ ಹಾಕಿ ಏಳು ಕೋಟಿ ರೂಪಾಯಿ ಕೇಳಿದ್ದ. ತನಿಖೆ ವೇಳೆ ವೈಶಾಕ್ ಬಂಧನವಾಯಿತು. ಮನೆಯಲ್ಲಿ ಪತ್ನಿ ಮೇಘನಾ ಜೊತೆ ಜಗಳ ಹೆಚ್ಚಾಯಿತು. ಖಿನ್ನತೆಯಿಂದ ಬಳಲುತ್ತಿದ್ದ ವೈಶಾಕ್ ಕ್ರಿಷಿತಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.
Comments