ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಗಳು ಶ್ವೇತಾ ತನ್ನ ಪ್ರಿಯಕರ ಕೆನೆತ್ ಜೊತೆ ಸೇರಿ ತಂದೆ ಸೋಮಸುಂದರ (55), ತಾಯಿ ಮುತ್ತುಲಕ್ಷ್ಮಿ (48), ಮತ್ತು ತಂಗಿ ಸುಪ್ರಿಯ (20) ಅವರನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶ್ವೇತಾ ಮತ್ತು ಕೆನೆತ್ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರು. ಇದನ್ನು ಪೋಷಕರು ವಿರೋಧಿಸಿದ್ದರಿಂದ ಈ ಕ್ರೂರ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಪೊಲೀಸ್ ಆಯುಕ್ತ ಸಿಮಂಸ್ ಕುಮಾರ್ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದು, ಆರೋಪಿಗಳು ಸಿಕ್ಕ ನಂತರ ಹೆಚ್ಚಿನ ವಿವರಗಳು ತಿಳಿಯಲಿವೆ ಎಂದು ತಿಳಿಸಿದ್ದಾರೆ.
Comments