Skip to playerSkip to main content
  • 4 minutes ago
ಬೆಂಗಳೂರಿನ ಕೆಆರ್‌ಪುರಂ ಸಿಗೆಹಳ್ಳಿಯಲ್ಲಿ ಒಂದೇ ಕುಟುಂಬದ ಮೂವರು ಬರ್ಬರ ಹತ್ಯೆಗೆ ಒಳಗಾಗಿದ್ದಾರೆ. ಮಗಳು ಶ್ವೇತಾ ತನ್ನ ಪ್ರಿಯಕರ ಕೆನೆತ್ ಜೊತೆ ಸೇರಿ ತಂದೆ ಸೋಮಸುಂದರ್ (55), ತಾಯಿ ಮುತ್ತುಲಕ್ಷ್ಮಿ (48), ಮತ್ತು ತಂಗಿ ಸುಪ್ರಿಯ (20) ಅವರನ್ನು ಮಚ್ಚಿನಿಂದ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಶ್ವೇತಾ ಪ್ರಿಯಕರನ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದಳು. ಇದನ್ನು ಪೋಷಕರು ವಿರೋಧಿಸಿ ಪದೇ ಪದೇ ಜಗಳ ಮಾಡುತ್ತಿದ್ದರು. ನಿನ್ನೆ ರಾತ್ರಿ ಮನೆಗೆ ಬಂದ ತಾಯಿ ಮತ್ತು ತಂಗಿಯನ್ನು ಇಬ್ಬರೂ ಸೇರಿ ಕೊಲೆ ಮಾಡಿ ಬಾತ್ರೂಮ್‌ನಲ್ಲಿ ರಕ್ತ ತೊಳೆದುಕೊಂಡರು. ನಂತರ ಬಂದ ತಂದೆ ಸೋಮಸುಂದರ್ ಅವರನ್ನೂ ಕೊಲೆ ಮಾಡಲಾಯಿತು. ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಕೆಆರ್‌ಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Category

🗞
News
Comments

Recommended