ಬೆಂಗಳೂರಿನ ತಿಗಳರಪಾಳ್ಯದಲ್ಲಿ ಭಗ್ನ ಪ್ರೇಮಿ ಚಂದ್ರಶೇಖರ್ ತನ್ನ ಪ್ರೇಯಸಿ ಭವಾನಿಯನ್ನು ರೂಮಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಲವ್ ಮರ್ಡರ್ ಪ್ರಕರಣ. ಚಂದ್ರಶೇಖರ್ ಮದುವೆಯಾಗಿ ಮಗುವಿದ್ದರೂ ಭವಾನಿಯೊಂದಿಗೆ ನಾಲ್ಕೈದು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದ. ಮುಂದಿನ ವಾರ ನಿಶ್ಚಿತಾರ್ಥ ನಿಗದಿಯಾಗಿತ್ತು. ಭವಾನಿ ಕಾಲ್ ಸ್ವೀಕರಿಸದಿದ್ದಾಗ ಪೋಷಕರು ಮನೆ ಮಾಲೀಕರಿಗೆ ಕರೆ ಮಾಡಿದರು. ಮನೆ ಮಾಲೀಕರು ಹೋಗಿ ನೋಡಿದಾಗ ಭವಾನಿ ಮೃತಪಟ್ಟಿದ್ದು ಮತ್ತು ಚಂದ್ರಶೇಖರ್ ವಿಷ ಸೇವಿಸಿ ನರಳುತ್ತಿದ್ದ ಘಟನೆ ಬೆಳಕಿಗೆ ಬಂತು.
Comments