ಮುಂಬೈನ ಬಾಂದ್ರಾದಲ್ಲಿ ಅಕ್ರಮ ವತ್ವರಿ ತೆರವು ಕಾರ್ಯಾಚರಣೆ ವೇಳೆ ಉದ್ರಿಕ್ತರು ಕಲ್ಲುತೂರಾಟ ನಡೆಸಿದರು. ಬಾಂದ್ರಾ ರೈಲ್ವೆ ಸ್ಟೇಷನ್ ಸಮೀಪದ 500ಕ್ಕೂ ಅಧಿಕ ಅಕ್ರಮ ಮನೆ ಮತ್ತು ಶೆಡ್ಗಳನ್ನು ಅಧಿಕಾರಿಗಳು ತೆರವುಗೊಳಿಸಿದರು. 2017ರಲ್ಲಿಯೇ ತೆರವು ಮಾಡುವಂತೆ ನೋಟಿಸ್ ನೀಡಲಾಗಿತ್ತು ಮತ್ತು ಬಾಂಬೆ ಹೈಕೋರ್ಟ್ ಕೂಡಾ ತೆರವು ಮಾಡುವಂತೆ ಆದೇಶ ನೀಡಿತ್ತು. ತೆರವು ಕಾರ್ಯಾಚರಣೆ ವಿರೋಧಿಸಿ ಕಿಡಿಗೇಡಿಗಳು ಕಲ್ಲು ತೂರಿದರು. ಪೊಲಿಸರು ಲಾಠಿ ಚಾರ್ಜ್ ನಡೆಸಿ 16 ಕಿಡಿಗೇಡಿಗಳನ್ನು ಬಂಧಿಸಿದರು.
Comments