Skip to playerSkip to main content
  • 8 hours ago
ಶಿರಾದಲ್ಲಿ ಒಬ್ಬ ತಂದೆ ತನ್ನ ಮಗಳನ್ನು ಪ್ರೀತಿ ವಿಚಾರದ ಕಾರಣಕ್ಕೆ ಕೊಲೆ ಮಾಡಿ ಶವವನ್ನು ನಿಂಬೆ ಮರದ ಬಳಿ ಹೂತು ಹಾಕಿದ ಘಟನೆ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆ ಶಿರಾದ ತಿಮ್ಮರಾಯಪ್ಪ ಎಂಬ ಆರೋಪಿ, ತನ್ನ ಮಗಳು ತಾಯಿಯ ಸಂಬಂಧಿಕರ ಹುಡುಗನನ್ನು ಪ್ರೀತಿಸುತ್ತಿದ್ದಕ್ಕೆ ವಿರೋಧಿಸಿ ಮಗಳನ್ನೇ ಕೊಲೆ ಮಾಡಿದ್ದಾನೆ. ಶವವನ್ನು ಹೂತು ಹಾಕಿದ ನಂತರ ಪೊಲೀಸ್ ಠಾಣೆಗೆ ಮಗಳು ಕಾಣೆಯಾಗಿದ್ದಾಳೆ ಎಂದು ಮಿಸ್ಸಿಂಗ್ ಕಂಪ್ಲೇಂಟ್ ಕೂಡ ನೀಡಿದ್ದ. ಪೊಲೀಸ್ ತನಿಖೆಯಲ್ಲಿ ಈ ಕಿಲ್ಲರ್ ಡ್ಯಾಡಿಯ ರಹಸ್ಯ ಬಯಲಾಗಿದೆ.

Category

🗞
News
Comments

Recommended