Skip to playerSkip to main content
  • 21 hours ago
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ತಂಡಗಳ ನಡುವೆ ನಡೆಯಲಿರುವ ಐಪಿಎಲ್ ಲೀಗ್ ಪಂದ್ಯಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಆರ್‌ಸಿಬಿಗೆ ಐದನೇ ಗೆಲುವು ಮತ್ತು ಗುಜರಾತ್‌ಗೆ ನಾಲ್ಕನೇ ಗೆಲುವಿನ ಗುರಿ ಇರುವ ಈ ಪಂದ್ಯಕ್ಕೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪ್ರತಿ ಗೇಟ್‌ನಲ್ಲಿ ಎಸಿಪಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ಮೊಬೈಲ್ ಕಳ್ಳತನ ತಡೆಗಟ್ಟಲು ವಿಶೇಷ ಸೂಚನೆಗಳನ್ನು ನೀಡಲಾಗಿದೆ.

Category

🗞
News
Comments

Recommended