ವಿಜೇಪುರದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದ್ದು, ತಂದೆ ಮಲ್ಲಿಕಾರ್ಜುನ ಅರಕೇರಿ ತನ್ನ ಆರು ವರ್ಷದ ಮಗನನ್ನು ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. 'ಮಗ ನನ್ನಂತೆ ಕಾಣುತ್ತಿಲ್ಲ' ಎಂಬ ಕಾರಣಕ್ಕೆ ಮತ್ತು ಗ್ರಾಮಸ್ತರು ಅದೇ ವಿಷಯದಲ್ಲಿ ಅಪ್ಪನನ್ನು ಗೇಲಿ ಮಾಡುತ್ತಿದ್ದ ಕಾರಣ ಈ ಕ್ರೂರ ಕೃತ್ಯ ನಡೆದಿದೆ. ಮಾರ್ಚ್ 15-16ರ ತಾರೀಕಿನಂದು ಮಗನನ್ನು ಶಾಲೆಗೆ ಸೇರಿಸಲು ಕರೆದೊಯ್ಯುವ ನೆಪದಲ್ಲಿ ಹೊರಟ ತಂದೆ ಮಗನನ್ನು ಕೊಂದು ತಲೆಮರೆಸಿಕೊಂಡಿದ್ದಾನೆ. ಕುಟುಂಬಸ್ತರು ಪೊಲೀಸರಿಗೆ ದೂರು ನೀಡಿದ ನಂತರ ಮಿಸ್ಸಿಂಗ್ ಕೇಸ್ ದಾಖಲಾಗಿದ್ದು, ಪೊಲೀಸ್ ವಿಚಾರಣೆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಹೃದಯವಿದ್ರಾವಕ ಘಟನೆ ಸಮಾಜದಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
Comments