Skip to playerSkip to main content
  • 57 minutes ago
ಚಿಕಮಗಳೂರಿನ ಮಾಣಿಕ್ಯದಾರ ಜಲಪಾತ ಪ್ರದೇಶದಲ್ಲಿ ಚಾರಣಕ್ಕೆ ಬಂದಿದ್ದ ಕೇರಳ ಮೂಲದ ಅಪ್ರಾಪ್ತ ಬಾಲಕಿ ಶ್ರೀನಂದ ಮೂರು ದಿನಗಳ ಕಾಲ ನಾಪತ್ತೆಯಾಗಿದ್ದಳು. 150ಕ್ಕೂ ಹೆಚ್ಚು ಸಿಬ್ಬಂದಿ, ಡ್ರೋನ್ ಬಳಸಿ ನಿರಂತರ ಶೋಧ ನಡೆಸಿದ ಬಳಿಕ ಸುಮಾರು 500 ಅಡಿ ಆಳದ ಕಂದಕದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆ ಸ್ಥಳದಿಂದ ಕಾಲು ಜಾರಿ ಬೀಳುವ ಸಾಧ್ಯತೆ ತೀರಾ ಕಡಿಮೆ ಇದ್ದು, ಬಾಲಕಿ ಮೇಲ್ಭಾಗದಿಂದ ಜಿಗಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆ ಅಥವಾ ಅಪಘಾತ ಎಂಬ ಅನುಮಾನ ಇನ್ನೂ ಬಗೆಹರಿದಿಲ್ಲ. ಮಗಳ ಶವದ ಸುದ್ದಿ ತಿಳಿದ ತಾಯಿ ಗದ್ಗದಿತರಾಗಿ ಆಕ್ರಂದನ ಮಾಡಿದ್ದು ಮನ ಕಲಕುವ ದೃಶ್ಯ ಮೂಡಿಬಂದಿದೆ.

Category

🗞
News
Comments

Recommended