ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೋಳಾ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಎಪ್ರಿಲ್ 9 ರಂದು ವಿಚಾರಣೆ ಮುಗಿದು ತೀರ್ಪಿನ ದಿನಾಂಕ ನಿಗದಿಯಾಗಿದೆ. 2016ರ ಜೂನ್ 15 ರಂದು ಧಾರವಾಡದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೋಳಾ ಕೊಲೆಯಾಗಿದ್ದು, ರಾಜಕೀಯ ವೈಷಮ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಆರೋಪಿಗಳು ಸಚಿವರಾಗಿದ್ದಾಗಲೇ ಕೊಲೆ ಕೇಸ್ನಲ್ಲಿ ಒಳಸಂಚು ನಡೆದಿದ್ದು, ಸ್ಥಳೀಯ ಪೊಲೀಸರು ತನಿಖೆಯಲ್ಲಿ ವೈಫಲ್ಯ ತೋರಿದ್ದಾರೆ ಎಂಬ ಆರೋಪಗಳಿವೆ. ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು, ಈಗ ತೀರ್ಪು ಹೊರಬರಬೇಕಿದ್ದು ಆರೋಪಿಗಳಿಗೆ ಜೈಲಾಗುತ್ತದೆಯೇ ಅಥವಾ ಬಿಡುಗಡೆಯಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.
Comments