ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶ್ರದ್ಧಾ ವಾಕರ್ ಮಾದರಿಯ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನೌಕಾಪಡೆ ಸಿಬ್ಬಂದಿ ರವೀಂದ್ರ ಎಂಬಾತ ತನ್ನ ಪ್ರೇಯಸಿ ಮೋನಿಕಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಶವವನ್ನು ತುಂಡರಿಸಿ ತಲೆ ಮತ್ತು ದೇಹದ ಭಾಗಗಳನ್ನು ಫ್ರಿಜ್ಜಿನಲ್ಲಿ ಇಟ್ಟಿದ್ದಾನೆ. ರವೀಂದ್ರನಿಗೆ ಮದುವೆ ಆಗಿದ್ದರೂ ಮೋನಿಕಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಮದುವೆ ಮತ್ತು ಹಣದ ವಿಷಯದಲ್ಲಿ ಜಗಳವಾಗಿ ಈ ದುರಂತ ಸಂಭವಿಸಿದೆ. ಕೊಲೆ ಮಾಡಿದ ನಂತರ ರವೀಂದ್ರ ಸ್ವತಃ ಪೊಲೀಸ್ ಠಾಣೆಗೆ ಹೋಗಿ ಶರಣಾಗತನಾಗಿದ್ದಾನೆ.
Comments