12 ವರ್ಷಗಳ ಹಿಂದೆ ಮೈಸೂರಿನ ಕಾಸಕಿ ಕಾಲೇಜಿನ ಆಯುರ್ವೇದ ವಿಭಾಗದ ಡಾ.ನಾಗಶ್ರಿ ಅವರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಮೋಸ ಮಾಡಿದ ಜೂನಿಯರ್ ವೈದ್ಯ ವಿನಯ್, ಅವರಿಗೆ ಓವರ್ಡೋಸ್ ಇಂಜೆಕ್ಷನ್ ನೀಡಿ ಕೋಮಾಕ್ಕೆ ತಳ್ಳಿದ. ನಂತರ ಗೌತಮಿ ಹಿರೇಮಠ ಎಂಬ ಎರಡನೇ ಯುವತಿಯನ್ನೂ ನಂಬಿಸಿ ಮೋಸ ಮಾಡಿದ. ಈ ಇಬ್ಬರೂ ಯುವತಿಯರು ಮೃತಪಟ್ಟಿದ್ದಾರೆ. ಮೂರನೇ ಸಂತ್ರಸ್ತೆ ವಿನೋದ ಈ ವಂಚಕ ವಿನಯ್ ವಿರುದ್ಧ ಕೋರ್ಟ್ ಮೆಟ್ಟಿಲೇರಿ ನ್ಯಾಯ ಕೇಳುತ್ತಿದ್ದಾರೆ. ಮುಂದೆ ಯಾವ ಹೆಣ್ಣುಮಕ್ಕಳಿಗೂ ಇಂತಹ ದುರ್ಗತಿ ಆಗಬಾರದು ಎಂಬ ಉದ್ದೇಶದಿಂದ ಈ ಪ್ರಕರಣ ಬೆಳಕಿಗೆ ತರಲಾಗಿದೆ.
Comments