ಕಾಂಗ್ರೆಸ್ ಸರ್ಕಾರದ 1000 ದಿನಗಳ 'ಸಾಧನಾ ಸಮಾವೇಶ'ದಲ್ಲಿ 6ನೇ ಯೋಜನೆಯಾದ 'ಭೂ ಗ್ಯಾರಂಟಿ'ಗೆ ಸಿಎಂ ಸಿದ್ದರಾಮಯ್ಯ ಹಾವೇರಿಯಲ್ಲಿ ಚಾಲನೆ ನೀಡಿದ್ದು, ಮುಂದಿನ ಚುನಾವಣೆಯಲ್ಲಿ 141 ಸೀಟು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ಸಮಾವೇಶವನ್ನು 'ಯಾತನಾ ಸಮಾವೇಶ' ಎಂದು ಲೇವಡಿ ಮಾಡಿರುವ ವಿಪಕ್ಷ ನಾಯಕರಾದ ಹೆಚ್.ಡಿ ಕುಮಾರಸ್ವಾಮಿ ಮತ್ತು ಬಿ.ವೈ ವಿಜಯೇಂದ್ರ, ಸರ್ಕಾರವು ಸಾವಿರ ಸುಳ್ಳುಗಳನ್ನು ಹೇಳಿ ಕರ್ನಾಟಕವನ್ನು 'ಕುಡುಕರ ರಾಜ್ಯ' ಮಾಡುತ್ತಿದೆ ಹಾಗೂ ಭೂ ಗ್ಯಾರಂಟಿ ಕೇವಲ ಸಚಿವರಿಗೆ ಮಾತ್ರ ಸೀಮಿತ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುವರ್ಣ ನ್ಯೂಸ್ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Kannada Debate | Suvarna News Discussion | Ajit Hanamakkanavar | Left Right And Centre
Comments