ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಕ್ಷೇತ್ರ ಚಿಂಚಲಿ ಮಾಯಕ್ಕ ದೇವಿಯ ಭಕ್ತರೊಬ್ಬರು ತಮ್ಮ ಹರಕೆ ಈಡೇರಿದ ಹಿನ್ನೆಲೆಯಲ್ಲಿ ದೇವಿಗೆ ಬರೊಬ್ಬರಿ 26 ಕೆಜಿ ತೂಕದ ಬೃಹತ್ ಬೆಳ್ಳಿ ತೊಟ್ಟಿಲನ್ನು ಕಾಣಿಕೆಯಾಗಿ ನೀಡಿದ್ದಾರೆ. ಮಹಾರಾಷ್ಟ್ರ ನಿವಾಸಿ ಸತೀಶ್ ಸಂಪತ್ ಬಾಬಾ ಎಂಬವರು ತಮಗೆ ಮಗು ಜನಿಸಿದ ಸಂತಸದಲ್ಲಿ ಈ ಬೆಳ್ಳಿಯ ಹರಕೆ ತೀರಿಸಿದ್ದು, ಇದನ್ನು ಕಂಡು ಇತರ ಭಕ್ತರು ಅಕ್ಷರಶಃ ನಿಬ್ಬೆರಗಾಗಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ ಸಾವಿರಾರು ಭಕ್ತರ ಆರಾಧ್ಯ ದೈವವಾಗಿರುವ ಮಾಯಕ್ಕ ದೇವಿಯ ಪವಾಡ ಮತ್ತು ಭಕ್ತನ ಅಪಾರ ಭಕ್ತಿಗೆ ಈ ಘಟನೆ ಸಾಕ್ಷಿಯಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Comments