ಕಾಂಗ್ರೆಸ್ಸಿನ "ಸೆಪ್ಟೆಂಬರ್ ಕ್ರಾಂತಿ" ಕುರಿತಂತೆ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟಾಂಗ್ ನೀಡಿದ್ದಾರೆ. ಈ ಕ್ರಾಂತಿಯಿಂದ ದೇಶದಲ್ಲೋಲ ಕಲ್ಲೋಲವಾಗೋಲ್ಲ, ಆದರೆ ಕಾಂಗ್ರೆಸ್ ಪಾರ್ಟಿಯೊಳಗೆ ಮಾತ್ರ ಗಲಾಟೆ ಖಚಿತ ಎಂದು ವ್ಯಂಗ್ಯವಾಡಿದ್ದಾರೆ. ಸಚಿವ ಸ್ಥಾನಕ್ಕಾಗಿ ನಿರೀಕ್ಷೆಯಲ್ಲಿ ಇರುವ ಶಾಸಕರು, ಸಿಎಂ ಬದಲಾವಣೆ ಗೊಂದಲದಿಂದ ಪಕ್ಷದ ಒಳಾಂಗಣ ಚರ್ಚೆ ಬಿಗಡಾಯಿಸಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ. "ಇಷ್ಟು ಗಲಾಟೆ ನಡೆದರೆ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಕಷ್ಟ" ಎಂದು ಅಶೋಕ್ ಚಾಟಿ ಬೀಸಿದ್ದಾರೆ.
Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates