ಸಿದ್ದರಾಮಯ್ಯ ಸೆಪ್ಟೆಂಬರ್ 3ಕ್ಕೆ ಯುರೋಪ್ ಪ್ರವಾಸ | ರಾಜ್ಯ ರಾಜಕಾರಣದಲ್ಲಿ ಸಂಚಲನ | Oneindia Kannada

  • 6 years ago
What will happen to the fate of HD Kumaraswamy led coalition government on Karnataka. CM Kumaraswamy and PWD Minister HD Revanna directly said, some people trying to break the government but we have hopes that we will complete 5 year term.

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ 'ರೂಮರ್ ಮಿಲ್' ನಂತೆ ಆಗಿರುವ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಅಂತೆಕಂತೆ ಸುದ್ದಿ, ಅದಕ್ಕೆ ಪುಷ್ಟಿ ನೀಡುವಂತೆ ಮೂರು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ನೀಡುತ್ತಿರುವ ಹೇಳಿಕೆಗಳು. ಮೇಲ್ನೊಟಕ್ಕೆ ಮಾತ್ರ ಎಲ್ಲವೂ ಸರಿ, ಒಳಗೊಳಗೆ ಏನೂ ಸರಿಯಿಲ್ಲ ಎನ್ನುವ ಪರಿಸ್ಥಿತಿಯಂತಿದೆ. ಸೆಪ್ಟಂಬರ್ ಎರಡರಂದು ಸಿದ್ದರಾಮಯ್ಯ ತಮ್ಮ ಪತ್ನಿ, ಪುತ್ರ, ಸೊಸೆ, ಸಚಿವರಾದ ದೇಶಪಾಂಡೆ, ಜಾರ್ಜ್ ಜೊತೆ ಯುರೋಪ್ ಗೆ ತೆರಳಲಿದ್ದಾರೆ. ಅವರು ಸ್ವದೇಶಕ್ಕೆ ವಾಪಸ್ ಆಗುವುದು ಸೆ.13ಕ್ಕೆ. ಸಿದ್ದರಾಮಯ್ಯ ಪ್ರವಾಸದಲ್ಲಿದ್ದಾಗ, ಯುರೋಪ್ ನಲ್ಲೇ ಅವರನ್ನು ಕೆಲವು ಕಾಂಗ್ರೆಸ್ ಶಾಸಕರು ಭೇಟಿಯಾಗುವ ಸಾಧ್ಯತೆಯಿದೆ ಎನ್ನುವ ಮಾತು ಹರಿದಾಡುತ್ತಿದೆ. ಸೆಪ್ಟಂಬರ್ ಮೂರಕ್ಕೆ ನನ್ನ ಸರಕಾರ ಪತನಗೊಳ್ಳಲಿದೆ ಎನ್ನುವ ಸುದ್ದಿಯ ಬಗ್ಗೆ ಕುಮಾರಸ್ವಾಮಿಯೂ ಪ್ರತಿಕ್ರಿಯೆ ನೀಡಿದ್ದಾರೆ.

Recommended