ಜಮ್ಮು ಕಾಶ್ಮೀರದ ಶ್ರೀನಗರದ ಆಸ್ಪತ್ರೆ ಮೇಲೆ ಭಯೋತ್ಪಾದಕ ದಾಳಿ | Oneindia Kannada

  • 6 years ago
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಶ್ರೀ ಮಹಾರಾಜ ಹರಿಸಿಂಗ್ ಆಸ್ಪತ್ರೆಯ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಆತಂಕ ಸೃಷ್ಟಿಯಾಗಿದೆ. 6 ಕೈದಿಗಳನ್ನು ಕೇಂದ್ರ ಕಾರಾಗೃಹದಿಂದ ಕರೆದುಕೊಂಡು ಬರಲಾಗಿತ್ತು. ಕೈದಿಗಳನ್ನು ಇಲ್ಲಿನ ಆಸ್ಪತ್ರೆಗೆ ಕರೆತಂದಾಗ ಪೊಲೀಸರ ಬಳಿಯಿಂದ ಪಿಸ್ತೂಲ್ ಕಸಿದ ಕೈದಿಯೊಬ್ಬ ಪೊಲೀಸರ ಮೇಲೇ ದಾಳಿ ನಡೆಸಿದ್ದಾನೆ. ಪೊಲೀಸರು ಪ್ರತಿ ದಾಳಿ ನಡೆಸಿದರಾದರೂ ಅಷ್ಟರಲ್ಲಾಗಲೇ ಲಶ್ಕರ್ ಇ ತೊಯ್ಬಾ ಸಂಘಟನೆಯ ಓರ್ವ ಭಯೋತ್ಪಾದಕ ಮತ್ತು ಒಬ್ಬ ಪಾಕ್ ಕೈದಿ ಪರಾರಿಯಾಗಿದ್ದಾರೆ.

Category

🗞
News

Recommended