ನವೆಂಬರ್ 7ರಿಂದ ಶುರುವಾಗುವ ಜೆಡಿಎಸ್ ವಿಕಾಸ ಯಾತ್ರೆಗೆ ಗೌಡ್ರು ಕುಮಾರಣ್ಣ ರೆಡಿ | Oneindia Kannada

  • 7 years ago
Former Prime Minister Devegowda Performs Holy Ritual in Hassan district Handrahalli along with his Family before a day to start Vikasa Yathra. Devegowda always believes in god, before every election he worship god and asks for good result.


'ವಿಕಾಸ ಯಾತ್ರೆ' ಯಶಸ್ಸಿಗಾಗಿ ದೇವೇಗೌಡ ಅವರಿಂದ ಹೋಮ. ಜೆ.ಡಿ.ಎಸ್ ಅನ್ನು ಅಧಿಕಾರಕ್ಕೆ ತರಲೇ ಬೇಕೆಂದು ಶತಾಯಗಥಾಯ ಶ್ರಮಿಸುತ್ತಿರುವ ಜೆ.ಡಿ.ಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಪಕ್ಷಕ್ಕೆ ಆಶೀರ್ವಾದ ಬೇಡಿ ಇದೀಗ ದೇವರ ಮೊರೆ ಹೋಗಿದ್ದಾರೆ. ಜೆ.ಡಿ.ಎಸ್ ನ ವಿಕಾಸ ಯಾತ್ರೆಗೆ ಇನ್ನು ಒಂದು ದಿನ ಇರುವಂತೆ ತಮ್ಮ ಹುಟ್ಟೂರು ಹಾಸನದ ಹರದನಹಳ್ಳಿಯಲ್ಲಿ ಹೋಮ ನಡೆಸುತ್ತಿರುವ ದೇವೇಗೌಡ ಅವರು ಯಾತ್ರೆಗೆ ಯಾವುದೇ ಅಡ್ಡ ಆತಂಕ ಎದುರಾಗದೇ ಯಾತ್ರೆ ಯಶಸ್ವಿ ಆಗಲೆಂದು ಪ್ರಾರ್ಥಿಸುತ್ತಿದ್ದಾರೆ.ಹೋಮದಲ್ಲಿ ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ, ಮಗ ರೇವಣ್ಣ, ಭವಾನಿ ರೇವಣ್ಣ, ಮೊಮ್ಮಗ ಡಾ.ಸೂರಜ್ ಅವರು ಪಾಲ್ಗೊಂಡಿದ್ದು, ಕುಮಾರಸ್ವಾಮಿ ಅವರ ಕುಟುಂಬವೂ ಹೋಮದಲ್ಲಿ ಪಾಳ್ಗೊಳ್ಳುವ ನಿರೀಕ್ಷೆ ಇದೆ.ಸ್ವಗೃಹದಲ್ಲಿ ಹೋಮ ಮುಗಿಸಿದ ನಂತರ ಕುಟುಂಬ ಸದಸ್ಯರೆಲ್ಲರೂ ಸಂಜೆ ನಂಜನಗೂಡಿಗೆ ತೆರಳಿ ಶ್ರೀಕಂಠೇಶ್ವರನಿಗೆ ಪೂಜೆ ಸಲ್ಲಿಸಿ ದರ್ಶನ ಮಾಡಲಿದ್ದಾರೆ.

Recommended