ಮಂಗಳೂರು ಚಲೋಗೆ ಬೆಂಗಳೂರಲ್ಲಿ ತಡೆ , ನಾಯಕರು ಪೊಲೀಸರ ವಶಕ್ಕೆ| Oneindia Kannada
  • 7 years ago
'ಮಂಗಳೂರು ಚಲೋ' ಜಾಥಾ ಹೊರಟಿದ್ದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಮಂಗಳೂರಿಗೆ ಹೊರಟಿದ್ದ ಜಾಥಾವನ್ನು ಪೊಲೀಸರು ಬೆಂಗಳೂರಿನಲ್ಲಿಯೇ ತಡೆದರು. ಮಂಗಳವಾರ ಬೆಳಗ್ಗೆ ಫ್ರೀಡಂಪಾರ್ಕ್‌ನಿಂದ ಬಿಜೆಪಿ ನಾಯಕರು ಮಂಗಳೂರಿಗೆ ಬೈಕ್ ಜಾಥಾ ಹೊರಡಬೇಕಿತ್ತು. ಆದರೆ, ಫ್ರೀಡಂಪಾರ್ಕ್‌ಗೆ ಬರದಂತೆ ನಗರದ ಹಲವು ಕಡೆ ಕಾರ್ಯಕರ್ತರನ್ನು ಪೊಲೀಸರು ತಡೆದರು. ಆದರೂ, ಹಲವು ಬೈಕ್‌ಗಳಲ್ಲಿ ಕಾರ್ಯಕರ್ತರು ಆಗಮಿಸಿದ್ದರು ರ್ಯಾಲಿಗೆ ಮುಂದಾಗಿದ್ದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ಸಿರ್ಸಿ ಸರ್ಕಲ್ ಬಳಿ ಇರುವ ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋದರು.
Recommended