Skip to playerSkip to main contentSkip to footer
  • 11 years ago
TV9 News: CM Chandrababu Naidu 'Unhappy' over Andhra Police..,

ಆಂಧ್ರ ಪೊಲೀಸರ ಕಾರ್ಯವೈಖರಿ ಬಗ್ಗೆ ಖುದ್ದು ಸಿಎಂ ಚಂದ್ರಬಾಬು ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಒಬ್ಬಿಬ್ಬರು ಅಧಿಕಾರಿಗಳ ಬಗ್ಗೆಯಲ್ಲಾ.. ಇಡೀ ಪೊಲೀಸ್ ಇಲಾಖೆ ಬಗ್ಗೆ. ಡಿಜಿಪಿಯಿಂದ ಕಾನ್ಸ್ ಟೇಬರ್ ವರೆಗೂ ಕರ್ತವ್ಯ ನಿರ್ವಹಿಸುವ ರೀತಿ ಸರಿಯಾಗಿಲ್ಲ. ತಮ್ಮ ನಿರೀಕ್ಷೆಗೆ ತಕ್ಕಂತೆ ಪೊಲೀಸ್ ಇಲಾಖೆ ಕೆಲ್ಸಾ ಮಾಡ್ತಿಲ್ಲ ಅಂತಾ ಚಂದ್ರಬಾಬು ನಾಯ್ಡು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ವಿಜಯವಾಡದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಮಾವೇಶದಲ್ಲಿ ಮಾತನಾಡಿದ ನಾಯ್ಡು, ಪೊಲೀಸರು ಸಮಯಕ್ಕೆ ತಕ್ಕಂತೆ ಅಪಗ್ರೇಡ್ ಆಗ್ತಿಲ್ಲಾ. ಸುಖಾಸುಮ್ಮನೆ ರೈತರನ್ನ ಹಿಂಸಿಸುತ್ತಿರುವುದು ಯಾಕೆ. ಪ್ರಮುಖವಾಗಿ ತೂಳ್ಳೂರು ಭಾಗದ ರೈತರ ತೋಟಗಳಿಗೆ ಬೆಂಕಿ ಹಚ್ಚಲಾಗ್ತಿದೆ. ಇಷ್ಟೆಲ್ಲಾ ಅದ್ರೂ ಪೊಲೀಸ್ ಇಲಾಖೆ ಕೈ ಕಟ್ಟಿ ಕುಳಿತಿದೆ ಅಂತಾ ಹರಿಹಾಯ್ದರು. ಅಲ್ಲದೇ,
ಗುಂಟೂರು ಗ್ರಾಮೀಣ ಎಸ್ ಪಿ ರಾಮಕೃಷ್ಣ ಕಾರ್ಯವೈಖರಿ ಬಗ್ಗೆ ಕೋಪಗೊಂಡು ಕೆಲ್ಸಾ ಮಾಡಿ ಇಲ್ಲಾಂದ್ರೇ ಅಂತಾ ಅವಾಜ್ ಕೂಡಾ ಹಾಕಿದ್ರು.

Category

🗞
News

Recommended